Sunday, March 17, 2013

ನಮನ

ಮೊದಲನೇ ಇಂಟರ್ನಲ್ಸು ಮುಗಿತು...ಹೆಂಗಾಯ್ತು ಅಂತೆಲ್ಲಾ ಕೇಳ್ಬೇಡಿ ಪ್ಲೀಸ್ ;)...
ಅದೇ ಖುಷಿಗೆ ಒಂದು ಕವನ ಬ್ಲಾಗಿಸ್ತಾ ಇದೀನಿ...
ಈಗ ಸುಮಾರು ಹದಿನೈದು ದಿನಗಳ ಹಿಂದೆ ವಿ.ಟಿ.ಯು ಫೆಸ್ಟ್ ಗೆ ಅಂತಾ ಅರ್ಜಂಟಿನಲ್ಲೊಂದು ದೇಶಭಕ್ತಿ ಗೀತೆಯನ್ನು ಬರೆಯಲು ಹೊರಟು ಹಿಂಗಾಯ್ತು...
ಜಾಸ್ತಿ ತೀರಾ ಯೋಚಿಸಿ ಬರೆದದ್ದೇನಲ್ಲಾ,ಹಂಗೆ ಸುಮ್ಮನೆ ಗೀಚಿದ್ದು...
ಫೆಸ್ಟ್ ನಾ ಸುದ್ದಿಯಂತೂ ಇಲ್ಲ,ಬರೆದದ್ದನ್ನಾ ನಿಮ್ಮೆದುರು ಇಟ್ಟಿದ್ದೇನೆ....
ಸಮಯವಿದ್ದಾಗ ಒಮ್ಮೆ ದಯವಿಟ್ಟು  ನೋಡಿ,ಹೆಂಗಿದೆ ಹೇಳಿ.....


ಮೂಡಣ ಪಡುವಣ,ಬಡಗಣ ತೆಂಕಣ
ಕೂಡಿದೆ ಜನಮನ ಹಾಡಲು ಜನಗಣ||

ಸಾಗರದಲೆಯಲು ಸರಿಗಮ ಸ್ವರವಿದೆ,
ಹಿಮಗಿರಿ ಜಾಲದಿ ವೇದದ ಅರಿವಿದೆ,
ಸಮತೆಯ ಬಯಲಲಿ ಹಸುರಿನ ಗರಿಯಿದೆ,
ನಲುಮೆಯ ನದಿಯಲಿ ಕಾಯಕ ಝರಿಯಿದೆ.

ಗಣಗಳ ಹಿರಿತನ,ಗಣಕದ ಹೊಸತನ,
ಚಿಗುರಿಗೆ ಬೇರಿನ ನೆರವಿನ ಸಿರಿತನ.
ಕಲೆಗಳ ನಂದನ,ಭಾಷೆಯ ಗೆಳೆತನ,
ವಿವಿಧತೆಯಲ್ಲೂ ಏಕತೆಯಾ ಗುಣ.

ಜ್ನಾನದ ಸ್ಪುರಣ,ಭಕುತಿಯ ಹೂರಣ,
ದೇಶಕೆ ದೇಹದ ಶಕ್ತಿಯೇ ಅರ್ಪಣ..
ವೈರಿಗೆ ಶೌರ್ಯದ ರಕುತದ ತರ್ಪಣ,
ನೀಡುವ ಸೈನ್ಯಕೆ ನಮ್ಮಯ ನಮನ..
ಹೆಮ್ಮೆಯ ನಮನ..

-ಚಿನ್ಮಯ ಭಟ್ಟ

(ಇದರಲ್ಲಿ ಅದೇಕೋ ಹೊಸ ಶಬ್ದಗಳು ಹೊಳೆಯಲಿಲ್ಲ....ಸುಮ್ಮನೆ ತುರುಕಲೂ ಮನಸಾಗಲಿಲ್ಲ... ಅದಕ್ಕಾಗಿ ಕ್ಷಮೆ ಇರಲಿ)
ಹಾಂ ಎಂದಿನಂತೆ ನಿಮ್ಮ ಸಲಹೆ-ಸೂಚನೆಗಾಗಿ ಕಾಯ್ತಿರ್ತಿನಿ..ನಿಮ್ಮ ಅನಿಸಿಕೆ ನಾ ದಯವಿಟ್ಟು ಬರಿರಿ...ನಂಗೆ ಅದೇ ಶಕ್ತಿ..
ತಪ್ಪುಗಳೇನಾದ್ರೂ ಕಂಡ್ರೆ ಮರೆಯದೇ ತಿಳಿಸಿ ನನ್ನನ್ನಾ ಬೆಳೆಸ್ತೀರಾ ಅಲ್ವಾ???