Sunday, August 7, 2011

ಈ-ದಿನ...

ಅನು ದಿನವೂ ಸ್ನೇಹಿತರ ದಿನ
ನೀವು ಒಳ್ಳೆಯ ಸ್ನೇಹವನ್ನು ಕೊಡುವವರಾಗಿದ್ದಲ್ಲಿ
ಪ್ರತಿ ದಿನವೂ ಪ್ರೇಮಿಗಳ ದಿನ
ನೀವು ಒಳ್ಳೆಯ ಪ್ರೀತಿಯನ್ನು ಕೊಡುವವರಾಗಿದ್ದಲ್ಲಿ

ಎಲ್ಲಾ ದಿನವೂ ಮಕ್ಕಳ ದಿನ
ನಿಮ್ಮಲ್ಲಿ ಬಾಲ್ಯದ ಮುಗ್ದತೆ ಉಳಿದಿದ್ದರೆ
ಶಿಕ್ಷಕರ ದಿನವು ಯಾವಾಗಲೂ
ನೀವು ಗುರುಗಳಿಗೆ ವಂದಿಸುವಿರಾದರೆ

ಪ್ರತಿ ದಿನವು ಪ್ರತಿ ಕ್ಷಣವೂ ವಿಶೇಷ
ನಾವು ಅಹಂಕಾರ,ಸ್ವಾರ್ಥವನ್ನು ಮರೆತರೆ,
ಪ್ರೀತಿ,ಸ್ನೇಹ,ವಂದನೆಗಳನ್ನು ಕೊಡುವುದನ್ನಷ್ಟೆ ಚಿಂತಿಸಿದರೆ.

6 comments:

Dr.D.T.Krishna Murthy. said...

ಕವನ ಇಷ್ಟವಾಯ್ತು ಚಿನ್ಮಯ್!ಅಭಿನಂದನೆಗಳು.

ಮನಸಿನಮನೆಯವನು said...

ಪ್ರತಿದಿನವೂ ದೀಪಾವಳಿಯೇ ಮನದಲ್ಲಿ ನೆಮ್ಮದಿಯ ಬೆಳಕಿದ್ದರೆ.
ಚೆನ್ನಾಗಿದೆ.

_ನನ್ನ ಬ್ಲಾಗಿಗೂ ಬನ್ನಿ.

ಗಿರೀಶ್.ಎಸ್ said...

Nice one Chinmay !!!

ಚಿನ್ಮಯ ಭಟ್ said...

@DTKM:ಧನ್ಯವಾದಗಳು ಡಾಕ್ಟ್ರೇ , ಬರುತ್ತಿರಿ..

ಚಿನ್ಮಯ ಭಟ್ said...

ವಿಚಲಿತ: ತುಂಬಾ ಧನ್ಯವಾದಗಳು..ನಾನು ೮-೧೦ ಸಾಲುಗಳಲ್ಲಿ ಹೇಳಹೊರಟಿರುವುದನ್ನು , ಒಂದೇ ಸಾಲಿನಲ್ಲಿ ಹೇಳಿದಿರಿ ...ಖುಷಿಯಾಯ್ತು.. ನಮಸ್ಕಾರ ,ಬರುತ್ತಿರಿ..

ಚಿನ್ಮಯ ಭಟ್ said...

ಗಿರೀಶ್: ಸ್ವಾಗತ ,ಬಡವರ ಮನೆಗೆ..
ಧನ್ಯವಾದ ತಮ್ಮ ಉತ್ತೇಜನಕ್ಕಾಗಿ ,
ಬರುತ್ತಿರಿ..