Sunday, October 3, 2010

ಹೊರಟರು ಎಲ್ಲರೂ ಅಂದು
ಈ ದಿನ ಗಾಂಧಿ ಜಯಂತಿ ಎಂದು
ವ್ರದ್ಧಾಶ್ರಮಕೆ,ಆಂಧ ಮಕ್ಕಳ ಶಾಲೆಗೆ
ತೊಟ್ಟು ಬಿಳಿ ವಸ್ತ್ರ

ಹೇಳಿದರು ಉದ್ದುದ್ದದ ಮಾತನು
ತಮಗೇ ಅರ್ಥವಾಗದಿದ್ದನು...
ಕೊಟ್ಟರು ಪೋಸು ,ಈ ಜಗದ ಕಣ್ಣಿಗೆ
ಕೊಡುವಾಗ ತಾವು ತಂದಿದ್ದನು ...

ಎಲ್ಲರೂ ಹೋದವರೇ ಅಲ್ಲಿ
ಮರುದಿನ ಪತ್ರಿಕೆಯಲಿ ಬರಲೆಂದೋ,
ಹೆಸರು ಜನರ ಬಾಯಿಗೆ ಬರಲೆಂದೋ
ಇಲ್ಲವೇ ತನ್ನವಳು ಬರುವಳೆಂದೋ

ಹೋದವರು ಬಹಳ ಕಡಿಮೆ
ಮಕ್ಕಳ ಸಿಂಬಳ ವರೆಸಲೆಂದೋ
ಹಿರಿಯರ ಕಣ್ಣೀರ ವರೆಸಲೆಂದೋ
ಅಲ್ಲವೇ ?


ಗೊತ್ತವರಿಗೆ ಹೋಗಲಲ್ಲಿಗೆ
ಗಾಂಧಿ ಜಯನ್ತಿಯೇ ಬೇಕಿಲ್ಲ ಎಂದು
ಮನವಿದ್ದೆಡೆ ಮಾರ್ಗ
ಗಾಂಧಿಜಯನ್ತಿಯು ಎಂದೆಂದೂ ...

ತೋರಿಕೆಗೆ ಮಾಡದಿರಿ ಏನನ್ನೂ
ಮೋಸಗೊಳಿಸದಿರಿ ನೀವೇ ನಿಮ್ಮನ್ನು !!!!!

No comments: